Tuesday, August 23, 2011

ದೇಶಕ್ಕೆ ಎರಡನೇ ಸ್ವಾತಂತ್ರ್ಯ ಚಳುವಳಿ!





"ದೇಶದಲ್ಲಿ ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ..

ಅಲ್ಲಿ ಮಹಾತ್ಮನೊಬ್ಬ ಉಪವಸ ಸತ್ಯಾಗ್ರಹ ಕುಳಿತಿದ್ದಾನೆ..

ಲಕ್ಷ ಲಕ್ಷ ಮಂದಿ ಅವರಿಂದ ಪ್ರಭಾವಿತರಾಗಿ ತಾವೂ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ..

ಜನರು ತಮ್ಮ ತಮ್ಮ ಕೆಲಸ ಕಾರ್ಯ ಬಿಟ್ಟು ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ..

ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಲೆ ಕಾಲೇಜು ಬಿಟ್ಟು ಹೋರಾಟಕ್ಕೆ ಇಳಿಯುತ್ತಿದ್ದಾರೆ.."

ಇವು ನಾವು ಶಾಲಾ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಓದಿದ್ದ ಸಾಲುಗಳು!

ಎಷ್ಟು ಕಾಕತಾಳೀಯವೆಂದರೆ, ಇಂದು ಅಂಥದ್ದೇ ಹೋರಾಟವನ್ನು ಮತ್ತೆ ನೋಡುತ್ತಿದ್ದೇವೆ!

ಇಂದು ಮಹಾತ್ಮ ಗಾಂಧಿಯ ಸ್ಥಾನದಲ್ಲಿ ಅವರ ಅನುಯಾಯಿ ಅಣ್ಣಾ ಹಜ಼ಾರೆಯವರು ದೇಶವನ್ನು ಮುನ್ನಡೆಸುತ್ತಿದ್ದಾರೆ..

ಸ್ವಾತಂತ್ರ್ಯದ ನಂತರ ಇಷ್ಟು ಒಗಟ್ಟಿನಿಂದ ದೇಶವಿಡೀ ಪ್ರತಿಭಟನೆ ನಡೆದಿರುವುದು ನಾನು ಇದೇ ಮೊದಲು ನೋಡುತ್ತಿರುವುದು!

ಇದು ನಿಜವಾಗಿಯೂ ದೇಶದ ಎರಡನೇ ಸ್ವಾತಂತ್ರ್ಯ ಹೋರಾಟವೇ ಸರಿ!

ಅಂದು ಬ್ರಿಟೀಷರ ವಿರುದ್ಧ ಹೋರಾಡಿದೆವು, ಇಂದು ಭ್ರಷ್ಟರ ವಿರುದ್ಧ ಹೋರಾಡಬೇಕಿದೆ!

ಅಣ್ಣಾ ಹಜ಼ಾರೆಯವರು ಭ್ರಷ್ಟಾಚಾರರಹಿತ ಭಾರತದ ಮಹಾಪಿತರಾಗಲಿದ್ದಾರೆ!

ಆದರೆ ಈಗಾಗಲೇ ಎಂಟು ದಿನಗಳು ಕಳೆದಿವೆ.. ಅಣ್ಣಾರವರ ಆರೋಗ್ಯ ಹದಗೆಡುವ ಪರಿಸ್ಥಿತಿಯಲ್ಲಿದೆ..

ಅವರಿಗೆ ದೇವರು ಹೋರಾಡುವ ಶಕ್ತಿ ಕೊಡಲಿ ಎಂದು ಬೇಡಿಕೊಳ್ಳುವೆ..

ಹಾಗು ನಿಮ್ಮೆಲ್ಲರನ್ನೂ ಅಣ್ಣಾರವರಿಗೆ ಬೆಂಬಲ ನೀಡಲು ಬೇಡಿಕೊಳ್ಳುವೆ..

ಇಷ್ಟಕ್ಕೂ ನಾವೆಲ್ಲ ಇಷ್ಟು ಕಷ್ಟಪಟ್ಟು ಜೀವನ ನಡೆಸುವುದು ಏಕೆ?

ನಮ್ಮ ಹಾಗು ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿಯಲ್ಲವೆ?

ದೇಶಕ್ಕೆ ಉತ್ತಮ ಭವಿಷ್ಯವಿಲ್ಲದಿದ್ದರೆ ಇನ್ನು ನಮಗೆಲ್ಲಿ ಉತ್ತಮ ಭವಿಷ್ಯ?

ಬನ್ನಿ ನಮ್ಮ ದೇಶವನ್ನು ಭವಿಷ್ಯದಲ್ಲಾದರೂ ಭ್ರಷ್ಟಾಚಾರರಹಿತ ಬಲಿಷ್ಠ ರಾಷ್ಟ್ರವನ್ನಾಗಿ ಮಾಡೋಣ..

ನನ್ನ ಕೆಲಸ ಕಾರ್ಯಗಳನ್ನು ಪಕ್ಕಕ್ಕೆ ಇಟ್ಟು ನಾಳೆ ನಾನೂ ಹೋರಾಟದಲ್ಲಿ ಪಾಲ್ಗೊಳ್ಳುತಿರುವೆ..

ನೀವೂ ಬರುವಿರಿ ತಾನೆ.. ತಪ್ಪದೆ ಬನ್ನಿ ದೇಶದ ಉಜ್ವಲ ಭವಿಷ್ಯ ನಿಮ್ಮೆಲ್ಲರ ಹಾದಿ ಕಾಯುತ್ತಿದೆ..

ಜೈ ಹಿಂದ್!

One of the SMSes I recieved read:
Anna Hazare says bring back the black money.Do you know what will happen if Rs.1456 lakh crore comes back....
1. India becomes financially no.1.
2. Each district will get Rs.6000 crores & 1 village will get 100 crores.
3. No need to pay taxes for next 20 yrs.
4. petrol- Rs.25/-; Diesel- Rs. 15/-; Milk- Rs.8/-
5. No need to pay electricity bill.
6. Indian borders will become stronger than China wall.
7. 1500 Universities like Oxford can be opened.
8. 28000 kms. rubber road (like in Paris) can be made,
9. 2000 hospitals with all facilities & medicines free.
10. 95 crores people will have their own house.

Indians Dream!

8 comments:

  1. ನಿಜವಾಗಲು ಇದು ದೇಶದ ಎರಡನೇ ಸ್ವಾತಂತ್ಯ ಸಂಗ್ರಾಮ ಅಂದರೆ ತಪ್ಪಾಗಲಾರದು...
    Jai ho !!!ಶುಭವಾಗಲಿ

    ReplyDelete
  2. ಹೌದುರೀ..

    _ನನ್ನ ಬ್ಲಾಗಿಗೂ ಬನ್ನಿ: ಚಿಂತನಾ ಕೂಟ

    ReplyDelete
  3. ನಿಮ್ಮ ಮಾತು ನಿಜ ಪ್ರದೀಪ್,ನಿಜಕ್ಕೂ ಇದು ನಮ್ಮ ದೇಶದ ಎರಡನೇ ಸ್ವಾತಂತ್ಯ ಸಂಗ್ರಾಮ. ನೀವು ಕೊಟ್ಟಿರುವ ಅ೦ಕಿ-ಅ೦ಶಗಳನ್ನು ಓದಿ ಅಚ್ಚರಿಯಾಯಿತು!

    ReplyDelete
  4. ನಿಜ.. ತು೦ಬಾ ಚೆನ್ನಾಗಿ ಬರೆದಿದ್ದೀರಿ..
    ಜೈ ಹಿ೦ದ್!

    ReplyDelete
  5. ಚೆನ್ನಾಗಿದೆ ಬರಹ ಪ್ರದೀಪ್..ಈ ಸ್ವಾತಂತ್ರ್ಯ ಸಂಗ್ರಾಮಕ್ಕೂ ಬೇಗ ಜಯ ಸಿಗಲಿ ಎಂಬ ಹಾರೈಕೆ.

    ReplyDelete
  6. ಪ್ರದೀಪ್ ಇದು ನಿಜಕ್ಕೂ ಕನಸಲ್ಲ ಎನ್ನುವುದು ನಮಗೆಲ್ಲಾ ಗೊತ್ತು...ಆದರೆ ...?? ಕೊಳೆಯೋ ಆ ಹಣಾನ ತರೋರು ಯಾರು? ಒಳ್ಲೆಯ ವೈಚಾರಿಕ ಲೇಖನ...

    ReplyDelete