Friday, December 31, 2010

ನಾ ನಿನ್ನ ಮರೆಯಲಾರೆ




ನುಂಗಿ ನೊಣೆಯುತ್ತಿದ್ದ ನೋವುಗಳ
ನೂಕಿ ನಡೆದು ಬಂದಳೊಬ್ಬಳು ನೀರೆ
ಕಣ್ಣುಗಳು ಎಂದೂ ಕಂಡಿರದ ಬಣ್ಣಗಳ
ತುಂಬಿಕೊಂಡು ತುಳುಕುತಿತ್ತು ಅವಳ ಸೀರೆ

ಕಾಲದ ಕಾಲ್ಕೆಳಗೆ ಕಣ್ಮರೆಯಾಗಿದ್ದ ಕನಸುಗಳ ಕಡೆಗೆ
ಕೈ ಹಿಡಿದು ಕರೆದೊಯ್ದ ಚೆಲುವೆ ನೀನ್ಯಾರೆ?
ಕಾಯುತಿರುವೆ ನಾ ಎಂದೆಂದೂ ನಿನಗಾಗಿ
ಬಾಳು ಬರುಡಾದಾಗಲೆಲ್ಲಾ ನೀ ಮರಳಿ ಬಾರೆ

ತುಂಬಿ ಹರಿಯುತ್ತಿದ್ದ ಕಣ್ಣುಗಳ ಒರೆಸಿ
ಎಡೆಬಿಡದೆ ಕಾಡಿದ್ದ ನೆನಪುಗಳ ಮರೆಸಿ
ಎಲ್ಲೆಡೆ ಮರುಜನ್ಮದ ಸುಗಂಧವ ಸೂಸಿ
ನಡೆಸಿದಳು ನನ್ನ ಮರಳಿ ಬಾಳಿನೆಡೆಗೆ
ಕೈಗೆ ಕೈ ಜೋಡಿಸಿ, ಹೆಜ್ಜೆಗೆ ಹೆಜ್ಜೆ ಸೇರಿಸಿ,
ಪ್ರತಿಹೆಜ್ಜೆಗೂ ಒಲವ ಹೂ ಮಳೆ ಸುರಿಸಿ

ಸಂಸಾರ ಸಾಗರದೀ ಪಯಣಕೆ, ನೀನಾದೆ ಧ್ರುವತಾರೆ,
ದೂರಾದರೂ ಕನಸುಗಳಲಿ, ನೆನಪುಗಳಲಿ ಆಗಾಗ,
ಇಣುಕಿ ನೀ ಸುಂದರ ಮೊಗವ ತೋರೆ,
ಅಷ್ಟೇ ಬಯಸುವುದಿಲ್ಲ ನಿನ್ನಿಂದ ನಾನೇನೂ ಬೇರೆ,
ಚೆಲುವೆ, ಎಂದೆಂದೂ ನಾ ನಿನ್ನ ಮರೆಯಲಾರೆ

"ಹೋಗದಿರು ನನ್ನ ಬಿಟ್ಟು" ಎಂದರೂ ನಾ ಅತ್ತು,
ಕೇಳದೇ ಹೋದಳು ಅವಳು ನನ್ನ ಮಾತು
ಬಳಿ ಬಂದು ನುಡಿದಳು, ಈ ಜಗವ ತ್ಯಜಿಸಲು
ನನಗೆ ಉಳಿದಿಲ್ಲ ಹೆಚ್ಚು ಹೊತ್ತು
ನಡುರಾತ್ರಿಗೆ ಇನ್ನು ಹತ್ತು ನಿಮಿಷವಷ್ಟೆ ಉಳಿದಿತ್ತು

ಅವಳು ನನ್ನನು, ನಿಮ್ಮನ್ನು, ಬಿಟ್ಟು ಹೊರಟೇ ಹೋದಳು!
ಅವಳನ್ನು ನೀವೆಲ್ಲರೂ ನೋಡಿದ್ದೀರಿ, ಅನುಭವಿಸಿದ್ದೀರಿ!
ಅವಳ ಬಗ್ಗೆ ನಿಮಗೆಲ್ಲಾ ಚೆನ್ನಾಗಿ ಗೊತ್ತು!
ಅವಳೇ ಇಸವಿ ಎರಡು ಸಾವಿರದ ಹತ್ತು!
Alias 2010 AD - Very Beautiful Lady!

======================000000000000000000000000===================




HAPPY NEW YEAR
2011
===================

Wednesday, December 29, 2010

Beautiful Christmas Moments Captured!


Hi Friends,

MERRY CHRISTMAS TO ALL OF YOU!!






Once again, My desire to capture festive moments across the city put me in action. This time though I had lost my camera mobile, it couldn't hold me back from roaming across the city & capturing some of the beautiful moments of christmas. I borrowed my friend's cam for this. Enjoy!!
-------------------------------------------------------------------
CAKE SHOW AT St. Joseph college Grounds
-------------------------------------------------------------------------
This is a huge 5 feet cake model of the The Taj Hotel in Mumbai which was attacked by terrorists last year in the 26/11 attacks.



Another Cake
Garden made of cake!

Ship Model in cake
Another garden of cakes

-----------------------------------------------------------------
Trinity Church, Trinity Circle, M.G. Road
-----------------------------------------------------------------
The Trinity Church is most probably the only place in the busy, crowded M.G. Road where you can find some peace, calmness & utter silence! It was built in the year 1852 by British people. Its 148 years old!







-------------------------------------------------
Sacred Heart Church, Shoolay Circle
-----------------------------------------------------




--------------------------------------------------
ST. MARY'S BASCILICA, SHIVAJINAGAR
--------------------------------------------------
This church in front of the Russel market in Shivajinagar is the oldest church of Bangalore. Its history begins from the year 1803. It all began with a small chapel with thatched roof which went under modification several times. Today its not only one of the oldest but also one of the most beautiful chrches in south India and also is the only church in the state that has been elevated to the status of a minor basilica




From




All Image Copyrights © Pradeep Rao

=================== 00000 =======================

Wednesday, December 22, 2010

ಪ್ರೇಮ ಕವಿಯ ಪಯಣಕೆ 1 ವರ್ಷ!



23rd December 2010ಗೆ ನನ್ನ ಈ ಬ್ಲಾಗ್ ಅವತರಿಸಿ ಒಂದು ವರ್ಷವಾಯಿತು. ಒಂದು ವರ್ಷದಿಂದ ನನ್ನ ಬ್ಲಾಗ್‍ಗೆ ಬಂದು ನಾನು ಗೀಚಿದ ಕಥೆ-ಕವನಗಳನ್ನು ಓದಿ, ಕೆಲವು ಬಾರಿ ಕಾಮೆಂಟುಗಳನ್ನು ಹಾಕಿ ನನ್ನನು ಪ್ರೋತ್ಸಾಹಿಸಿದಕ್ಕೆ ಅನಂತ ಅನಂತ ಧನ್ಯವಾದಗಳು. ನಿಮ್ಮೆಲ್ಲರಿಗೆ ನಾನು ಚಿರರುಣಿ. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನ, ಪ್ರೋತ್ಸಾಹಗಳು ಈ ಪೇಮ ಕವಿಯ ಪಯಣಕ್ಕೆ ಹೀಗೆ ವರ್ಷಾನುವರ್ಷ ದೊರೆಯುತ್ತಿರಲಿ ಇಂದು ಆಶಿಸುವೆ.

Flashback...

ಒಂದು ವರ್ಷದ ಹಿಂದೆ..

ಎಲ್ಲಿಗೀ ಪಯಣ..
ಯಾವುದೋ ದಾರಿ..
ಏಕಾಂಗಿ ಸಂಚಾರಿ...

ಎಂಬ ರಾಜ್‍ಕುಮಾರ್ ಹಾಡು ಟಿವಿಯಲ್ಲಿ ನೋಡುತಿದ್ದ ನಾನು ಬ್ಲಾಗ್‍ಗೆ ಯಾವ ಹೆಸರಿಡಬೇಕು ಎಂಬಾ ಯೋಚನೆಯಲ್ಲಿದ್ದೆ.. ಸ್ನೇಹಿತರೆಲ್ಲರೂ ಮೊದಲಿಂದಲೂ ನನ್ನ ಪ್ರೇಮಕವಿ ಎಂದು ಕರೆಯುತ್ತಿದ್ದರು.. ಕನ್ನಡದಲ್ಲಿ ಪ್ರೇಮಕವಿಯೆಂದು ಹೆಸರು ಪಡೆದವರು ಕೆ.ಎಸ್.ನರಸಿಂಹ ಸ್ವಾಮಿಯವರು. ಅವರ ಕ್ಷಮೆಯೊಂದಿಗೆ ಅವರ ಬಿರುದನ್ನು ಕದ್ದು ನಾನು "ಪ್ರೇಮಕವಿಯ ಪಯಣ" ಎಂದು ನಾಮಕರಣ ಮಾಡಿದೆ..

ಒಂದು ವರ್ಷದ ಹಿಂದೆ ಈ ಪಯಣ ಶುರುವಾಗಿದ್ದು ನಂಜನಗೂಡಿನ ಶ್ರೀಕಂಠೇಶ್ವರ ದೇವಲಯದಿಂದ. ಆ ದೇವಾಲಯದ ಬಗ್ಗೆ ಬರೆದಿದ್ದೆ ಈ ಬ್ಲಾಗಿನ ಮೊದಲ ಲೇಖನ. ಶ್ರೀಕಂಠೇಶ್ವರನ ಆಶೀರ್ವಾದದೊಂದಿಗೆ ಶುರುವಾದ ಈ ಪಯಣ ಇಂದು ಯಶಸ್ವಿಯಾಗಿ ಸಾಗಿದೆ. ಈ ಪಯಣಕ್ಕೆ ಹಲವು ಕವಿಗೆಳೆಯರು ಜೊತೆಯಾದರು. ಹಲವು ಸ್ಮರಣಾರ್ಹ ಸಂದರ್ಭಗಳು ಬಂದವು. ಪಯಣ ಅಂದ ಮೇಲೆ ಹಲವು ಜನರು ಬರುತ್ತಿರುತ್ತಾರೆ. ಹೋಗುತ್ತಿರುತ್ತಾರೆ.. ಬರುವವರಿಗೆ ನಾನು ಎಂದೂ ಕೈ ಬೀಸಿ ಕರೆಯುವೆ.. ಹೋಗಲೇಬೇಕೆನ್ನುವವರನ್ನು ನಾನು ತಡೆಯಲಾರೆ.. ಈ ಪಯಣ ಶುರು ಮಾಡಲು ಸ್ಪೂರ್ತಿ ನೀಡಿದವರು ಏಕೋ ದೂರವಾಗಿದ್ದಾರೆ.. ಇಂದು ಅವರಿಗೂ ಧನ್ಯವಾದಗಳನ್ನು ತಿಳಿಸುವೆ. ನಾನು ಬ್ಲಾಗ್‍ಗೆ ಏನೇ ಗೀಚಿ ಹಾಕಿದರೂ ತಮ್ಮ ಅಮೂಲ್ಯ ಸಮಯದಲ್ಲಿ ಅದನ್ನು ಓದಿ ಅಭಿಪ್ರಾಯ ತಿಳಿಸುವ ಸತ್ಯ, ಸೀತಾರಾಮ್, ಅಶೋಕ್, ದಿನಕರ್, ಪ್ರಭಾಮಣಿ, ಸೌರಭ, ಮಂಜುನಾಥ್ ಮತ್ತು ಉಳಿದವರೆಲ್ಲರಿಗೂ ತುಂಬಾ ಧನ್ಯವಾದಗಳು.

ಈ ಪಯಣ ಇಂದು ಸಾಗುತಿದೆ ಯಶಸ್ವಿಯಾಗಿ...

ಸಾಗುತಿದೆ.. ಪಯಣ.. ಪ್ರೀತಿಯ ಕಡೆಗೆ.. ಸ್ನೇಹದ ಕಡೆಗೆ.. ಙ್ನಾನದ ಕಡೆಗೆ..

ಸಾಗುತಿರಲಿ ಈ ಪಯಣ ಎಂದೆಂದೂ.. ನಿಮ್ಮೊಡನೆ..

Sunday, December 19, 2010

Sachin Tendulkar gets 50th Ton!

IF CRICKET IS A RELIGION,
SACHIN IS THE GOD !!
---------------------------------------------------------------------------------
CONGRATULATIONS TO SACHIN TENDULKAR ON ACHIEVING AN UNBELIEVABLE MILESTONE OF 50 CENTURIES IN TEST CRICKET!!


He is the God!

He is the Lord!

Cricket is his heaven,

And the bat is his sword!



Sachin - Highest run getter of 2003 worldcup awarded Man of the series
-------------------------------------------------------------------------------------


The records were made

For him to break,

The whole world watched

in dead silence,

as he went on to conquer,

The useen lands,

And nobody was ever

Able to put a brake!




He is the gem of indian team,

Rightly he is called "The Run-Machine"

In his mind blowing career, he has been

To levels and milestones unforeseen.



Sachin's twin centuries (143 & 134*) at sharjah against Australia in 1998 which won India the coca cola cup series are the among his best innings
--------------------------------------------------------------------------


From child hood to this day,

Memories of his glorious career

Have brought joy & made me gay,

They have been the reason for my cheer!




A talent never born before

And not sure of the future

We feel blessed & lucky

To watch in live action

THE GREAT SACHIN TENDULKAR





A Famous saying:

If you want to commit a sin,

Do it when the bat is with Sachin,

Because then,

Even god is busy watching,

The Little master's great batting!



(Photo Courtesy - Internet)

Friday, December 10, 2010

ಮೊಬೈಲ್ ರಾಯ.. ನಿನಗೆ ವಿದಾಯ!



"BREAKING" NEWS
--------------------------------------------------------------------------------------------

ಮೇರು ಪ್ರತಿಭೆಯ, ನಮ್ಮ-ನಿಮ್ಮೆಲ್ಲರ ನೆಚ್ಚಿನ ಯುವ ಛಾಯಾಚಿತ್ರಗಾರ - ಮೊಬೈಲ್ ರಾಯ (N73) ಇನ್ನಿಲ್ಲ !!
---------------------------------------------------------------------------------------------
ನವೆಂಬರ್ 25 ನೇ ತಾರೀಖು, ಬೆಲಂದೂರ್ ರಿಂಗ್ ರಸ್ತೆಯಲ್ಲಿ ಸಂಜೆ ಸುಮಾರು ಏಳು ಗಂಟೆಗೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವ ಛಾಯಾಚಿತ್ರಗಾರ ಮೊಬೈಲ್ ರಾಯರು ನೆನ್ನೆ ದಿನ ತಮ್ಮ ಅಂತಿಮ Call ಮುಗಿಸಿ ಶಾಶ್ವತವಾಗಿ Switch Off ಆಗಿದ್ದಾರೆ! ಅವರಿಗೆ ಕೇವಲ 2 ವರ್ಷ 6 ತಿಂಗಳು ವಯಸ್ಸಾಗಿತ್ತು!
-------------------------------------------------------------------------------------------
ಅಪಘಾತದ ಸನ್ನಿವೇಶ:
ಇದೇ ಅಪಘಾತದಲ್ಲಿ ಇವರ ಜೊತೆಗಿದ್ದ "ಪ್ರೇಮ ಕವಿ" (ಅವರೊಬ್ಬ ಕವಿಯೇ? ಎಂಬುದು ಚರ್ಚೆಯಲ್ಲಿರುವ ವಿಷಯ ಎಂಬುದು ಬೇರೆ ಮಾತು!) ಪ್ರದೀಪ್ ರಾವ್‍ರವರು ಲಘುವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರೆ, ಜೊತೆಗಿದ್ದ Spot-Boy Kinetic Honda ಅವರು ನಡೆಯುವ, ಓಡುವ ಸ್ಥಿತಿಯಲ್ಲಿಲ್ಲದಿದ್ದರೂ ಪೋಲೀಸರು ಸಿಕ್ಕಿದ್ದೇ ಸೀರುಂಡ ಎಂದು ಹಣದಾಸೆಗೆ ಎಳೆದುಕೊಂಡು ಹೋಗಿದ್ದರು. ಮೂರು ಜನರು Director ಹಾಗು Producer ರವರನ್ನು ಕಂಡು ಹೊಸ ಸಿನಿಮಾ ಒಂದರ Call Sheet ಗೆ ಸಹಿ ಹಾಕಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.. ಸಿನಿಮಾಗೆ ಕೊಲ್ಕತ್ತಾಯಿಂದ ಬಿಂಕದ ಬೆಂಗಾಲಿ ನಾಯಕಿ "ಶುಭ್ರ"(Please Note: ಅವರ ಹೆಸರಿಗೂ Character ಗೂ ಯಾವುದೇ ಹೋಲಿಕೆಯ ತಪ್ಪು ಕಲ್ಪನೆ ಮಾಡದಿರಿ!) ಅವರನ್ನು ಕರೆತರಲಾಗಿತ್ತು. Meeting ಮುಗಿಸಿ ಹೊರಬಂದ ಅವರು ಹಳೇ ಗೆಳೆಯನೊಬ್ಬನನ್ನು ನೋಡಲು ಕಲಾಸಿಪಾಳ್ಯಗೆ Drop ಕೇಳಿದರು.. ಆಗ ಪಾಪ.. ಪ್ರದೀಪ್ ರವರು ತಮ್ಮ Route ಬೇರೆಯದಾದರೂ ಬೆಂಗಳೂರಿನಲ್ಲಿ ಒಂಟಿ ಬೆಂಗಾಲಿ ಹುಡುಗಿಯನ್ನು ಬಿಟ್ಟು ಹೋಗುವುದು ಥರವಲ್ಲವೆಂದು ಅವರಿಗೆ
drop ಕೊಡಲು ಒಪ್ಪಿಕೊಂದೆಬಿಟ್ಟರು! ಅಯ್ಯೋ ರಾಮ! ಹಿಂದೆ ಬೆಂಗಾಲಿ ಹುಡುಗಿ ಕೂತಿರಬೇಕಾದ್ರೆ ಮುಂದೆ ಬೆಂಗಳೂರ್ ಹುಡುಗಿ ಬಂದ್ರೆ ಕಾಣುತ್ತಾಳ? ನೀವೇ ಹೇಳಿ? ಅಷ್ಟೇ ಆಗಿದ್ದು.. ಮುಂದೆ ರಸ್ತೆ ದಾಟುತ್ತಿದ್ದ ಬೆಂಗಳೂರ್ ಹುಡುಗಿ ಪಾಪ ಕಾಲು ಮುರ್ಕೊಂಡಳು! ರಸ್ತೆಯಲ್ಲಿ ಅದೂ ಬೆಂಗಳೂರು ರಸ್ತೆಯಲ್ಲಿ ಹುಡುಗಿ ಬಿದ್ದರೆ ಜನರು ಸುಮ್ನಿರ್ತಾರ? ಅಪಘಾತ ನಡೆಯುತ್ತಿದ್ದಂತೆಯೇ ಸುತ್ತ ಮುತ್ತ ಇದ್ದ ಜನ ನಾ ಮುಂದೆ ತಾ ಮುಂದೆ ಎಂದು Super Hero ಗಳಂತೆ ಓಡಿಬಂದರು.. ಹೊಸ ಸಿನಿಮಾ Shooting ಶುರು ಆಗುವುದಕ್ಕೆ ಮುಂಚೆಯೇ Climax Fighting ಹೇಗಿರಬೇಕು ಅಂತ ಪ್ರದೀಪ್ರವರಿಗೆ Rehersal ತೋರಿಸಿಹೊದರೆಂದು ಪ್ರತ್ಯಕ್ಷದರ್ಶಿತಿಳಿಸಿದ್ದಾರೆ! ನಂತರ ಪ್ರದೀಪ್ರವರು ಹೇಗೋ ಸಂಭಾಳಿಸಿಕೊಂಡು ಎದ್ದು NIMHANS ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದರು.. (ಅವರು ಆ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳುವುದು ಒಳ್ಳೆಯದು ಎಂದು ಹಲವರು ಬಹಳ ದಿನಗಳಿಂದ ಸಲಹೆ ಕೊಡುತಿದ್ದರು ಎಂದು ಮೂಲಗಳು ತಿಳಿಸಿವೆ!)
ಆಸ್ಪತ್ರೆಯಲ್ಲಿ ವೈದ್ಯರು ಕೇಳಿದರಂತೆ - "ಅಪಘಾತವಾದಾಗ ಪ್ರಜ್ಞೆ ತಪ್ಪಿದ್ದಿರ?"
"ಇನ್ನು ಸ್ವಲ್ಪ ಹೊತ್ತಿನಲ್ಲಿ ಪ್ರಜ್ಞೆ ತಪ್ಪುವುದರಲ್ಲಿತ್ತು ಅಷ್ಟರಲ್ಲಿ ಅಪಘಾತವಾಗಿ ಹೋಯ್ತು!"
---------------------------------------------------------------------------------------------

N73 - 3.2 Megapixel Camera - ಸಾಧನೆ



ಎರಡು ವರ್ಷಗಳಿಂದ ಅತ್ಯುತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು ತೆಗೆದು ಎಲ್ಲರ ಮನ ತಣಿಸಿದ್ದ ಮೊಬೈಲ್ ರಾಯ ಇಂದು ಶಾಶ್ವತವಾಗಿ ತನ್ನ Shutter Close ಮಾಡಿಕೊಂಡಿದ್ದಾನೆ ಇನ್ನು "ACTION" ಎಂಬಾ ಕೂಗಿಗೆ ಆಟ ಪ್ರತಿಕ್ರಯಿಸಲಾರ! ಆತ ತೆಗೆದ ಚಿತ್ರಗಳು "ಪ್ರೇಮ ಕವಿಯ ಪಯಣ" ದಲ್ಲಿ ಪ್ರದರ್ಶಿತಗೊಂಡು ಜನರಲ್ಲಿ ರೋಮಾಂಚನ ಮೂಡಿಸಿತ್ತು. ನಂಜನಗೂಡಿನಿಂದ ಶುರುವಾಗಿದ್ದ ಪ್ರೇಮಕವಿಯ ಜೊತೆಗಿನ ಈತನ ಪಯಣ ಇಂದು ಕೊನೆಗೊಂಡಿದೆ.. ಲಾಲ್ ಬಾಗ್ ನ Flower Show, ಬೆಂಗಳೂರಿನ ನಮ್ಮ ಮೆಟ್ರೋ, ಇತ್ಯಾದಿ ಅದ್ಭುತ ಚಿತ್ರಗಳ ತೆಗೆದಿದ್ದ ಈತ ಕೇವಲ 3 ತಿಂಗಳ ಹಿಂದಷ್ಟೇ ನಿಮ್ಮೆಲರಿಗೆ ಬೆಂಗಳೂರಿನ 101 ಗಣಪತಿಗಳ ದರ್ಶನ ಮಾಡಿಸಿದ್ದ. ಕವಿ, ಕಾವ್ಯ, ಜನಪದ ಹಾಗು ಸಾಹಿತ್ಯ ಕಾರ್ಯಕ್ರಮಗಳೆಂದರೆ ಈತನಿಗೆ ಬಹಳ ಆಸಕ್ತಿಯ ವಿಷಯಗಳಾಗಿದ್ದವು. ಸಾಂಸ್ಕೃತಿಕ, ಪುರಾಣಿಕ, ಐತಿಹಾಸಿಕ ಸ್ಥಳಗಳ ಭೇಟಿ ಹಾಗು ಅವುಗಳ ಚಿತ್ರೀಕರಣ ನೆಚ್ಚಿನ ಹವ್ಯಾಸ. ಇನ್ನೇನು ಹೋಗುವ ಸಮಯ ಹತ್ತಿರ ಬಂದಿದ್ದಾಗಲು ಕೊನೆಯ Battery Charge ಗಟ್ಟಿ ಹಿಡಿದು ಮೊನ್ನೆ ನಡೆದ 3K - ಕವಿ ಕೂಟದ ಸಂಭ್ರಮದಲ್ಲಿ ಭಾಗವಹಿಸಿ, ಅಲ್ಲಿ ಬಂದಿದ್ದವರೆಲ್ಲರನ್ನು ಕಂಡು ತನ್ನ ಕಣ್ಣು ತುಂಬಿಕೊಂಡಿತು. ಆ ತುಂಬಿಕೊಂಡ ಮಂಜು ಮಂಜಿನ ಕಣ್ಣುಗಳಲ್ಲಿ ಒಂದು ಚಿತ್ರ ತೆಗೆದುಕೊಟ್ಟನು. ಅದೇ ಈ ಮೊಬೈಲ್ ರಾಯನ ಕೊನೆಯ ಚಿತ್ರವಾಗಿತ್ತು!
ಇದೆ ಆ ಕೊನೆಯ ಚಿತ್ರ


-------------------------------------------------------------------------------------------------
ಅಂತ್ಯಸಂಸ್ಕಾರ (ಸ್ಥಳ: National Market, ಸಮಯ: ಭಾನುವಾರ, ಬೆಳೆಗ್ಗೆ 11 ಗಂಟೆಗೆ)


ಮೊಬೈಲ್ ರಾಯನ ಪಾರ್ಥಿವ Panel ಅನ್ನು ಸ್ನೇಹಿತರಾದ ಸ್ವರೂಪ್ ಹಾಗು ಮಂಜು ರವರು ಕಂಡು ಅಂತಿಮ ನಮನಗಳನ್ನು ಸಲ್ಲಿಸಿದರು. ಇದೇ ಭಾನುವಾರದ ದಿನ ಬೆಳೆಗ್ಗೆ 11 ಗಂಟೆಗೆ Second hand goods ಗೆ famous ಆಗಿರುವ National Market ನಲ್ಲಿ ಮೊಬೈಲ್ ರಾಯನಿಗೆ ಅಂತ್ಯ ಸಂಸ್ಕಾರಗಳನ್ನು ಪೂರೈಸಲಾಗುವುದು. ಅಪಘಾತವಾದ ಮರುದಿನವೇ ಅವರು ತಮ್ಮ Will ಬರೆದಿಟ್ಟಿದ್ದಾರೆ.. ಅವರ ಇಚ್ಛೆಯಂತೆ ಅವರ SIM card ಅವರ ಉತ್ತರಾಧಿಕಾರಿಗೆ ದೊರಕುವುದು.. ಅದರಲ್ಲಿರುವ currency ಹಾಗು Contacts ಕೂಡ ಉತ್ತರಾಧಿಕಾರಿಯ ಸ್ವತ್ತು. ಮಿಕ್ಕಂತೆ ಕಣ್ಣು, ಕಿವಿ, ಕಿಡ್ನಿ ಎಲ್ಲ heavy damage ಆಗಿರೋದ್ರಿಂದ ಯಾರು ಅವಕ್ಕೆ ಕೈ ಹಾಕೋ ಹಾಗಿಲ್ಲ ..


........
....


ಇನ್ನು ಏನ್ ತಿಥಿ ವಡೆ ಸಿಗುತ್ತೇನೋ ಅಂತ ನೋಡ್ತಾ ಇದ್ದೀರಾ..??!!

ಅಷ್ಟೆಲ್ಲ Scene ಇಲ್ಲ..

Party ಬೇಕಿದ್ರೆ ಬನ್ನಿ..

ಮೊಬೈಲ್ ರಾಯನ ಸಿಂಹಾಸನದ ಉತ್ತರಾಧಿಕಾರಿಯಾಗಿ ಆಯ್ಕೆಯಾದವರಿಗೆ..

***** ಪಟ್ಟಾಭಿಷೇಕ ಸಮಾರಂಭ *****


C O M I N G S O O N ...


------------------------------------------------------------------------------------------------

ಲೇಖನದಲ್ಲಿರುವ ಪಾತ್ರಗಳು ಹಾಗು ಸನ್ನಿವೇಶಗಳು ಕೇವಲ ಕಾಲ್ಪನಿಕ. ವಾಸ್ತವಕ್ಕೆ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕಾಕತಾಳೀಯವಷ್ಟೆ. ಅಪಘಾತದಲ್ಲಿ N73 ಒಡೆದು ಹೋಗಿದ್ದಷ್ಟೆ ಕಠೋರ ಕಹಿ ಸತ್ಯ!