Sunday, August 29, 2010

Love Triangle

ಅವಳು ಮರವಾದರೆ,
ಅವನು ಭೂಮಿ, ನಾನು ಆಕಾಶ,
ಕಾಯುತ್ತಲೇ ಇದ್ದೆವು ಇಬ್ಬರೂ,
ಮನದ ಭಾವನೆಗಳ ಸಸಿ ಬೆಳೆದು,
ಹೆಮ್ಮರವಾಗಲು, ಹುಡುಕುತ್ತಿದ್ದೆವು ಅವಕಾಶ
ಮನದ ಮಹದಾಸೆಗಳ ಅವಳಿಗೆ ತಿಳಿಸಲು.

ಅವಳ ಮನವು ಅರಳಿ ಹಸಿರಾಗುವರೆಗೆ
ನಾ ಮಧುರ ಭಾವಗಳ ಮಳೆ ಸುರಿಸಿದೆ
ಆದರೂ ಮರದ ಕೊಂಬೆಗಳು ಬಾಗಿವೆ ಭೂಮಿಯೆಡೆಗೆ
ಬೇರಿಗೆ ಭೂಮಿಯ ಭದ್ರ ಹಿಡಿತ ಹಿಡಿಸಿದೆ.

ಭೂಮಿಯೆ ಮರವ ಮೊದಲು ತಬ್ಬಿದರೂ
ಈ ಆಗಸವಲ್ಲವೆ ಅದಕೆ ತೋರಿದ್ದು ಬೆಳಕು
ನಾನಲ್ಲವೇ ನೀರ ತಂದಿದ್ದು ಆ ಬೇರುಗಳ ಕೆಳಕೂ

ಮರವೇನೋ ಮೂಕ, ಇಹುದದಕೆ ಋಣ
ಮೆಚ್ಚೀತು ಹೇಗೆ ಅದು ನನ್ನ ಚಂಚಲ ಗುಣ?
ನನಗೋ ಹಗಲಿಗೊಂದು, ಇರುಳಿಗೊಂದು
ಬೆಳಗಿಗೊಂದು, ಸಂಜೆಗೊಂದು ಬದಲಾಗುವ ಬಣ್ಣ

ಸ್ವಾರ್ಥ ಭೂಮಿ ಬಂಧಿಸಿತ್ತೆಂದೋ ಬೇರುಗಳ
ನೀಡಿತ್ತು ಪ್ರೀತಿಯ ಕಟ್ಟಿ ಶರತ್ತುಗಳ ಕೋಟೆ
ನಾ ನನ್ನ ಪ್ರೀತಿಗೆ ಬಯಸದೇ ಬೇರೇನೂ
ಬೆಳಕ ಕೊಟ್ಟೆ, ಗಾಳಿಯ ಕೊಟ್ಟೆ, ಮಳೆಯ ಕೊಟ್ಟೆ
ಕೊನೆಗೆ ದೂರದಿಂದಲೆ ಬಾಗುವುದ ಕಂಡು
ಆ ಮರದ ಮನದ ಕೊಂಬೆಗಳು ಭೂಮಿಯೆಡೆಗೆ
ಮರದ ಬಳಿಯೂ ಬಾರದೆ ಪ್ರೀತಿಯ ಬಿಟ್ಟು ಕೊಟ್ಟೆ
ಮರಳಿ ಮರೆವಿನ ಮೋಡಗಳ ಹಿಂದೆ ಮರೆಯಾದೆ.

============ooo============

This poem is inspired from Rabindranath Tagore's saying "The soil in return for her service keeps the tree tied to her. The sky asks nothing and leaves it free."

=============000==============

Tuesday, August 17, 2010

Lalbagh Flower Show - 2010

The Below photo shows the foundation stone of the glass house in Lalbagh laid by Prince Albert Victor Christian Edward of Wales, UK in 1889 - that was year Glass house of Lalbagh took birth now its 121 years old! However the Glass house of Lalbagh was renovated by S.M. Krishna in 2004, Then the chief minister of state. The India Gate model seen behind is this year's main attraction of the flower show. Its completely made of roses!




This below photo shows a tower which is one of the 4 towers built by the great Kempe Gowda (1521 - 1569 ) of Bangalore. He built 4 towers in Bangalore marking the boundaries of the city those 4 towers are now at:
1) Mekhri circle
2) Lalbagh
3) Ulsoor lake
4) Kempambudhi lake
These towers were built originally to mark the boundary of Bangalore.. but today the city has grown so limitlessly that all these 4 towers have come fairly 30kms inside the city from border!

A sand artist at work





ಗಂಡಬೇರುಂಡ



































ನಾನು ಅಲ್ಲಿರುವಾಗ ನನ್ನ ಪಕ್ಕದಲ್ಲೇ ಮಗು ಒಂದು ಓಡಿ ಬಂದು ತನ್ನ ಅಮ್ಮನ ಬಳಿ ಕೇಳಿತು : "ಅಮ್ಮಾ.. ಹೂವಿನ ಗಿಡದಲ್ಲಿ ಕೋಳಿ ಪುಕ್ಕನೂ ಬಿಡುತ್ತಾ" ಎಲ್ಲರೂ ಜೋರಾಗಿ ನಕ್ಕರು.. ಮಗು ಸಿಟ್ಟು ಮಾಡಿಕೊಂಡು ತನ್ನ ಅಮ್ಮನನ್ನು ಎಳೆದು ಕರೆದುಕೊಂಡು ಹೋಗಿ ತಾನು ನೋಡಿದ ದೃಶ್ಯವನ್ನು ತೋರಿತು.. ಅಲ್ಲಿ ಅವರಿಗೆ ಕಂಡದ್ದು ಇದು.. ಹೂವಿನ ಮೊಗ್ಗಿಗೆ ಎಲ್ಲಿಂದಲೊ ಒಂದು ಪುಕ್ಕ ಬಂದು ಅಂಟಿತ್ತು..


ಹೂವಿನೊಡನೆ ದುಂಬಿಗಳ ಸರಸ...













Thursday, August 5, 2010

ಸ್ನೇಹನಾ? ಪ್ರೀತಿನಾ?


Re-posting my old poem on friend's demand. This was the poem most liked by my friends.

ಕವನದ ಸನ್ನಿವೇಶ: ಒಂದು ಹುಡುಗಿಯು ತನ್ನಲ್ಲಿ ತೋರುತ್ತಿರುವ ಸ್ನೇಹವು ಪ್ರೇಮವಿರಬಹುದೆ ಎಂದು ಹುಡುಗನಿಗೆ ಸಂದೇಹ ಆಗುತ್ತದೆ. ಅದು ನಿಜವೊ ಇಲ್ಲ ಪ್ರೇಮದ ನಿರೀಕ್ಷೆಯಲ್ಲಿರುವ ತನ್ನ ಮನಸ್ಸಿನ ಭ್ರಮೆಯೋ ತಿಳಿಯದೆ ಗೊಂದಲ ಪಡುತ್ತಾನೆ. ಮನಸ್ಸಿಗೆ ಬುದ್ಧಿ ಹೇಳುತ್ತಾನೆ.

ಕರಗದಿರು ಮನವೇ, ಅವಳ ಸುಮಧುರ ಸ್ನೇಹಕ್ಕೆ,
ಕರಗಿ ಎರಡು ಬಗೆಯದಿರು, ಸ್ನೇಹದ ಧ್ಯೇಯಕ್ಕೆ,
ಅವಳು ಆಡುವ ಮಾತು, ಅವಳು ನೀಡುವ ಸಲಿಗೆ,
ಚೂರು ಹೆಚ್ಚೆನಿಸಬಹುದು ನಿನ್ನ ಯೋಗ್ಯತೆಯ ಬೆಲೆಗೆ
ಕೆಡವದಿರು ಈ ಮುಗ್ಧೆಯ, ನಿನ್ನ ಪ್ರೇಮದ ಬಲೆಗೆ,
ಹೊಗಳಬೇಕೋ ತೆಗಳಬೇಕೋ ನಾ ಕಾಣೆ
ನಿನ್ನ ಕಲ್ಪನೆಯ ಕಲೆಗೆ.

ನಿನ್ನ ಮನದ ಮಹದಾಸೆಯ ಅವಳರಿತ ಘಳಿಗೆ,
ಸಿಡಿಯಬಹುದು ಅವಳ ಹೃದಯ,
ಹೋಗಿಬಿಡಬಹುದು ತೂರಿ ನಿನ್ನ ಸ್ನೇಹವ ಗಾಳಿಗೆ
ಮರಳಿ ಬಾರದಿರಬಹುದು ಎಂದೂ ನಿನ್ನ ಬಳಿಗೆ



ಹಿಡಿದಿರಬಹುದು ಆಕೆ ಎಂದೋ ಜೊತೆ ನಡೆವಾಗ
ನಡುವೆ ಆಯ ತಪ್ಪಿ ನಿನ್ನ ಕೈಯ,
ಹಿಡಿದ ಕೈಯ ಹಿಡಿದೆ ಇರಲಿ
ಎಂಬ ನಿನ್ನ ಆಸೆಯು ಸರಿಯಾ?
ಮಾಡಿರಬಹುದು ನೀ ಅವಳಿಗೆ
ಮೆಚ್ಚಬೇಕಾದಂತಹ ಸಹಾಯ
ಅದರ ಪ್ರತಿಯಾಗಿ ಒಲವ
ಅಪೇಕ್ಷಿಸುವುದು ಸರಿಯಾ?

ಆದ ಆಕಸ್ಮಿಕಗಳ ಭಾವಿಸದಿರು
ಅದೆಂದು ಅವಳ ಅಭಿನಯ
ನೀ ಮಾಡುವ ತುಂಟಾಟಕೆ ರೇಗದೆ
ನಕ್ಕು, ತಲೆಯ ತಗ್ಗಿಸಿ ಹೋದರೆ
ತಿಳಿ ಅದುವೆ ಅವಳ ವಿನಯ
ಆಗುವ ಬಯಕೆ ಏಕೆ ಮನವೇ
ಇಷ್ಟು ಆತುರದಿ ಅವಳ ಇನಿಯ?
ನಿನ್ನ ಊಹೆ ಸುಳ್ಳಾದರೆ, ಮತ್ತೆ
ನೀನಾಗುವುದಿಲ್ಲ ಅವಳ ಗೆಳೆಯ.