Wednesday, January 15, 2014

ಹಳ್ಳಿ ಹಳ್ಳಿಗೆ ಸ್ನೇಹ ಮತ್ತು ಸಹಾಯ



12th January 2014 ಅಂತರ್ಜಾಲದ ಸಮಾಜಮುಖಿ ಚಟುವಟಿಕೆಗಳಿಗೆಂದೇ ಸ್ಥಾಪನೆಗೊಂಡ "ಸ್ನೇಹ ಸಹಾಯ ಸಂಘ" ಎಂಬ ಸಮುದಾಯದ ವತಿಯಿಂದ ಮಂಡ್ಯ ಜಿಲ್ಲೆಯ ಮಲವಳ್ಳಿ ತಾಲ್ಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸೌಲಭ್ಯಗಳ ಹಾಗು ಶಿಕ್ಷಕರ ಕೊರತೆಗಳಿಂದ ಬಳಲುತ್ತಿರುವ ಹಳ್ಳಿಗಳ ಸರಕಾರಿ ಶಾಲೆಗಳಲ್ಲಿ ವಿಧ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಹಾಗು ಸುಲಭ ಕಲಿಕೆಗೆ ಅನುವು ಮಾಡಿಕೊಡಲು ಅಂಥ ಶಾಲೆಗಳನ್ನು ಗುರುತಿಸಿ ಅವಕ್ಕೆ ಎಜುಸ್ಯಾಟ್ ಎಂಬ ಉಪಗ್ರಹ ಶಿಕ್ಷಣ ಸೌಲಭ್ಯದ ಉಪಕರಣಗಳನ್ನು ಕೊಡುಗೆಯಾಗಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಙ್ಞಾನವಿ ಗ್ರಾಮೀಣ ಅಭಿವೃದ್ಧಿ ತಂಡ ಎಂಬ ಸಂಘದ ಜೊತೆ ಕೈಜೋಡಿಸಿ ಸ್ನೇಹ ಸಹಾಯ ಸಂಘ ನೆರವೇರಿಸಿದ ಕಾರ್ಯಕ್ರಮ ಇದಾಗಿತ್ತು.

 ಸುಮಾರು ಐವತ್ತು ಜನರಿಂದ ಸಂಗ್ರಹಿಸಿದ ಇಪ್ಪತ್ತೈದು ಸಾವಿರ ರೂಪಾಯಿಗಳು ಸ್ನೇಹ ಸಹಯ ಸಂಘದ ಕೊಡುಗೆಯಾದರೆ ಇನ್ನು ಇಪ್ಪತೈದು ಸಾವಿರ ರೂಪಾಯಿಗಳು ಮತ್ತೊಂದು ಕಂಪನಿಯಿಂದ ಬಂದು ಒಟ್ಟು ಅಂದಾಜು ಐವತ್ತು ಸಾವಿರ ರೂಪಾಯಿಗಳಲ್ಲಿ  Dish Antenna, T.V. , Set Top box, UPS , Speakers ಇಷ್ಟನ್ನು ಕೊಡುಗೆ ನೀಡಲಾಯಿತು.

ಏನಿದು ಎಜುಸಾಟ್?

Edusat ಎಂದರೆ  Educational Satellite  ಎನ್ನುವುದರ ಸಂಕ್ಷಿಪ್ತ ರೂಪ.  20th September 2004 ರಂದು ಉಡಾವಣೆಗೊಂಡ  ISRO ದ ಸಂಪರ್ಕ ಉಪಗ್ರಹ GSAT-3 ಎಂಬುದರ ಇನ್ನೊಂದು ಹೆಸರೇ  EDUSAT. ಇದು ಸಂಪೂರ್ಣ ಶೈಕ್ಷಣಿಕ ಉದ್ದೇಶಕ್ಕಾಗಿಯೇ ಉಡಾಯಿಸಲಾದ ದೇಶದ ಮೊಟ್ಟ ಮೊದಲನೆಯ ಉಪಗ್ರಹ. ಕುಗ್ರಾಮಗಳಲ್ಲಿ ಕೂಡ ಉಪಗ್ರಹದ ಮುಖಾಂತರ ಶೈಕ್ಷಣಿಕ ವಿಷಯಗಳ ಬಗ್ಗೆ ಪಾಠಗಳನ್ನು ಟಿವಿ ವಾಹಿನಿಗಳಂತೆ ಪ್ರಸಾರ ಮಾಡಬಹುದು. ಆ ಮೂಲಕ ದೇಶದ ಯಾವುದೇ ಮೂಲೆಯಲ್ಲಿದ್ದರೂ ವಿದ್ಯಾರ್ಥಿಗಳಿಗೆ ಉತ್ತಮಮಟ್ಟದ ಶಿಕ್ಷಣ ಒದಗಿಸಲು ಬಹಳ ಉಪಯೋಗಕಾರಿ ಯೋಜನೆಯಿದು. ಈ GSAT-3 ಎಂಬ ಉಪಗ್ರಹವು ಈ ಹೊಸ ರೀತಿಯ ಶಿಕ್ಷಣ ಸೇವೆಯನ್ನು ಉಪಸ್ಥಿತಿಗೆ ತಂದಿತಾದರೂ 2010ರಲ್ಲಿ ತನ್ನ ಜೀವಾವಧಿ ಮುಗಿಸಿತು. ಇಂದಿನ ದಿನ ISRO ತನ್ನ ಇತರೆ ಹೊಸ ಉಪಗ್ರಹಗಳ ಮುಖಾಂತರ EDUSAT ಎಂಬ ಹೆಸರಿನಲ್ಲಿಯೇ ಈ ಉಪಗ್ರಹ ಶಿಕ್ಷಣ ಸೇವೆಯನ್ನು ಮುಂದುವರಿಸಿದೆ.

ಎಜುಸ್ಯಾಟ್ ಸೌಲಭ್ಯ ಪಡೆಯಲು ಏನೇನು ಬೇಕು?

ಎಜುಸ್ಯಾಟ್ ಉಪಕರಣಗಳನ್ನು ಮಾರಾಟ ಮಾಡುವ ಬಹಳಷ್ಟು ಕಂಪೆನಿಗಳು ಗೂಗಲ್ ಸರ್ಚ್ ಮಾಡಿದರೆ ಸಾಕು ಸಿಗುತ್ತವೆ. One-way Broadcasting ಅಂದರೆ ಉಪಗ್ರಹದಿಂದ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಟಿವಿ ವಾಹಿನಿಯಂತೆ ನೋಡಲು Dish Antenna, T.V. , Set Top box ಇದ್ದರೆ ಸಾಕು.  Interactive TV, video conferencing, computer conferencing, web-based instructions ಹೀಗೆ ಈ ಉಪಗ್ರಹದಿಂದ ಇನ್ನೂ ಅನೇಕ ಸೌಲಭ್ಯಗಳನ್ನು ಪಡೆಯಬಹುದಾದ ಸಾಧ್ಯತೆಗಳುಂಟು ಆದರೆ ಅವಕ್ಕೆ ಇನ್ನು ಆಧುನಿಕ ಉಪಕರಣಗಳು ಬೇಕಾಗುವವು ಹಾಗು ವೆಚ್ಚ ಹೆಚ್ಚಾಗುವವು.

ಮುಂದಿನ ಯೋಜನೆಗಳು...

ವರುಷಕ್ಕೆ ಕನಿಷ್ಠ ಎರಡು ಬಾರಿ ಗ್ರಾಮೀಣ ಅಭಿವೃದ್ಧಿ ಕೆಲಸಗಳನ್ನು ಮಾಡಲೇಬೇಕೆಂಬುದು ಸ್ನೇಹ ಸಹಾಯ ಸಂಘದ ಧ್ಯೇಯವಾಗಿದೆ. ಅಂತಹ ಕಾರ್ಯಕ್ರಮಗಳ ಸಾಲಿನಲ್ಲಿ ಕೂನನಕೊಪ್ಪಲು ಕಾರ್ಯಕ್ರಮ ಏಳನೆಯದಾಗಿದೆ. ಇದೇ ವರ್ಷದ ದ್ವಿತೀಯಾರ್ಧದಲ್ಲಿ ಮತ್ತೊಂದು ಕಾರ್ಯಕ್ರಮ ಹಮ್ಮಿಕೊಳ್ಳುವ ಉತ್ಸಾಹದಲ್ಲಿದ್ದಾರೆ ತಂಡದ ಮುಂದಾಳುಗಳಾದ ಮಹೇಶ್ ಗೌಡ, ದಿವ್ಯಾ ಶ್ರೀ ಹಾಗು ರಮೇಶ್ ಅವರು. ಅವರ ಈ ಮಹತ್ಕಾರ್ಯಗಳಿಗೆ ಅಭಿನಂದನೆಗಳನ್ನು ಹೇಳುತ್ತ ಕಾರ್ಯಕ್ರಮದ ಸಫಲತೆಗೆ ಕೈ ಜೋಡಿಸಿದ ಹಾಗೂ ಪ್ರಯಾಣಕ್ಕೆ ಜೊತೆಯಾದ ಎಲ್ಲ ಮಿತ್ರ ವೃಂದದವರಿಗೂ ನನ್ನ ನಮನಗಳು.

ಕೂನನಕೊಪ್ಪಲು ಭಾಗದ ವಿದ್ಯಾರ್ಥಿಗಳ ಬಾಳು ಶೀಘ್ರವೇ ಬೆಳಗಲಿದೆ. ಅವರ ಕಲಿಕೆಗೆ ಅಡ್ಡವಾಗಿದ್ದ ಕಷ್ಟ ಕೋಟಲೆಗಳು ಶೀಘ್ರವೇ ಮುಗಿಯಲಿದೆ. ಕಾರಣ ಅವರಿಗಾಗಿ ಹಾಗು ಸುತ್ತಮುತ್ತಲಿನ ಹಳ್ಳಿಯವರಿಗಾಗಿ ಙ್ಞಾನವಿ ತಂಡದಿಂದ ಹಾಗು ಸರಕಾರಿ ಅಧಿಕಾರಿಗಳ ನೆರವಿನಿಂದ ಅಲ್ಲಿ ಆಧುನಿಕ ಸೌಲಭ್ಯಗಳುಳ್ಳ ಒಂದು ಹೊಸ ಶಾಲೆ ಹೊಸ ಕಟ್ಟಡ ನಿರ್ಮಾಣ ಆಗುತ್ತಿದೆ ಎಂಬುದು ಅತ್ಯಂತ ಸಂತೋಷಕರ ವಿಷಯ!


 Facebookನಲ್ಲಿ ಸ್ನೇಹ ಸಹಾಯ ಸಂಘವನ್ನು ಸೇರಲು ಕ್ಲಿಕ್ಕಿಸಿ...

https://www.facebook.com/groups/snehasahayasangha/ 


ಬೆಳಗಲಿ ಬೆಳೆಯಲಿ ಗ್ರಾಮೀಣ ಭಾರತ
ಸ್ನೇಹ ಸಹಾಯ ಸಂಘಕ್ಕೆ ನಿಮಗೆಲ್ಲ ಸುಸ್ವಾಗತ  

4 comments:

  1. ನಿಮಗೆ ಹಾಗು ಸ್ನೇಹ ಸಹಾಯ ಸಂಘಕ್ಕೆ ಅಭಿನಂದನೆಗಳು.
    ಸಂಕ್ರಾಂತಿಯು ಮಂಗಳವನ್ನು ತರಲಿ.

    ReplyDelete
    Replies
    1. ತುಂಬಾ ಧನ್ಯವಾದಗಳು ಸುನಾಥ್ ಸರ್... ನಿಮ್ಮ ಆಶೀರ್ವಾದಗಳು ಸದಾ ಕಾಲ ದೊರೆಯುತ್ತಿರಲಿ ಎಂದು ಬೇಡುವೆ.

      Delete
  2. Thank you Pradeep Rao...event bagge thumba vivaravagi bardidira...haage namma jothegudidakke sathoshavaithu...hige nimma support irli...thank u
    https://www.facebook.com/groups/snehasahayasangha/

    ReplyDelete
    Replies
    1. Thank you too Ramesh... naanu nimmellara company tumba enjoy madide :)

      Delete