Monday, January 25, 2010



ದೇವರೇ.... ನೀನು ಕಲ್ಲು



ಓ ದೇವರೇ..
ಎಷ್ಟು ಚೆನ್ನಾಗಿರುತಿತ್ತು...
ನಿಂತುಬಿಡುವ ಹಾಗಿದ್ದರೆ
ನಾವು ಕಲ್ಲಾಗಿ ನಿನ್ನಂತೆ!
ಬಿಟ್ಟು ಈ ಜೀವ ದೇಹದ ಚಿಂತೆ.

ಯಾರ ಪ್ರಶ್ನೆಗೂ ಉತ್ತರಿಸುವಷ್ಟಿಲ್ಲ
ಜರೆದರೂ ಎಲ್ಲರೂ ಮೌನವೇ ಎಲ್ಲಾ
ಮುನ್ನಡೆಯುವುದು ಹೇಗೆ ಎಂಬ
ಯೋಚನೆಯೇ ಇರದು..
ಹಿಂದಿನಿಂದ ಯಾರೂ ತಳ್ಳಲೂ ಆಗದು
ಸುಮ್ಮನೆ ನಗುತಾ ಇರಬಹುದು
ನಿಂತಲ್ಲೇ ನಿಂತು..
ಸಹಿಸಲು ಸಾಧ್ಯ ಆಗ ಒಂದೊಂದಾಗಿ
ನೀ ಕೊಡುವ ಕಷ್ಟಗಳ ಕಂತು.

***********************************************************

ತಿರುಪತಿ ತಿಮ್ಮಪ್ಪನ ಅನುಗ್ರಹ ನಮ್ಮೆಲರ ಮೇಲಿರಲಿ ಅಂತ ಬೇಡುವೆ...







6 comments: