ಗೆಳೆಯರೇ,
ನಿನ್ನೆ ನಾನು ಬಿಡದಿಯಲ್ಲಿರುವ ನಿತ್ಯಾನಂದನ ಆಶ್ರಮಕ್ಕೆ ಭೇಟಿ ನೀಡಿದೆ. ನಾನು ಅಲ್ಲಿಗೆ ಹೋದ ವಿಷಯ ಕೇಳಿ ನನ್ನ ಎಲ್ಲಾ ಸ್ನೇಹಿತರು ಅಚ್ಚರಿಗೊಂಡಂತೆ ನೀವು ಆಶ್ಚರ್ಯ ಪಡುವಿರಿ ಎಂದು ಭಾವಿಸಿರುವೆ. ನನ್ನ ಸ್ನೇಹಿತರಂತೂ ಕೆಲವರು "ಅಲ್ಲಿಗೆ ಯಾವ ಹೊಸ ಕಲೆ ಕಲಿಯೋಕೆ ಹೋಗಿದ್ದೆಯಪ್ಪ ಕಲಾವಿದ?" ಎಂದು ವಿಚಿತ್ರವಾಗಿ ಕೇಳಿ ಹಾಸ್ಯ ಮಾಡಿದರು. ನಿಜ ಇಷ್ಟೆ.. ನಾನು ಕೇವಲ ಕುತೂಹಲ ತಣಿಸಲು ಅಲ್ಲಿಗೆ ಹೋಗಿದ್ದೆ.
ನಾನು ನಿತ್ಯಾನಂದನ ಅಪ್ಪಟ ವಿರೋಧಿ ಎಂಬುದು ನಿಜ. TV9ನಲ್ಲಿ ಆತನ ರಾಸಲೀಲೆಯ ದೃಶ್ಯಗಳು ಪ್ರಸಾರವಾದಾಗಿನಿಂದ ನನಗೆ ಆತನ ಮೇಲೆ ಎಲ್ಲಿಲ್ಲದ ಸಿಟ್ಟು. ನಮ್ಮ ಭಾರತೀಯ ಸಂಸ್ಕೃತಿ ಬಗ್ಗೆ ಜನ ಇಟ್ಟಿರುವ ಅಪಾರ ಭಕ್ತಿ ಅಭಿಮಾನಗಳನ್ನು ದುರುಪಯೋಗ ಪಡಿಸಿಕೊಂಡು ಅದಕ್ಕೆ ಮಸಿ ಬಳಿಯುವ ಇಂತಹ ಕಳ್ಳ ಸನ್ಯಾಸಿಯರನ್ನು ದ್ವೇಷಿಸುತ್ತಾ ಬಂದಿರುವೆ. ಈ ಹಿಂದೆ ಆತನ ವಿರೋಧವಾಗಿ ಇದೇ blogನಲ್ಲಿ ಒಂದೆರಡು post ಮಾಡಿದ್ದೆ. ಇವತ್ತು ಸೋಮವಾರದ ದಿನ ರಜ ಇತ್ತು. ಸ್ನೇಹಿತರೆಲ್ಲರೂ ಕೆಲಸಕ್ಕೆ ಹೊರಟರು. ಆದ್ದರಿಂದ ಒಬ್ಬನೇ ಎಲ್ಲಾದರೂ ಸುತ್ತಾಡಿ ಬರೋಣ ಎಂದು ಯೋಚಿಸಿ, ರಾಮನಗರದ ಶ್ರೀ ರಾಮ ಬೆಟ್ಟಕ್ಕೆ ಹೋಗಿ ಬರೋಣವೆಂದು ತೀರ್ಮಾನಿಸಿ ನನ್ನ ಪುಟ್ಟ ಕೈನಿ ಹತ್ತಿ ಹೊರಟೆ.
------@ The King of the Road - My Kinetic!! @------

ಅಂತೂ ಕಾಲೇಜಿನ ದಿನಗಳಿಂದಾನೆ ಅದಕ್ಕೆ ಆ ಹೆಸರು ಇರುವುದು ನೆನಪು!!
----@ ಶ್ರೀರಾಮ ಬೆಟ್ಟಕ್ಕೆ ನನ್ನ ಸವಾರಿ ಹೊರಟಿದ್ದು ಹೀಗೆ @-----

ನಾನಿರುವ ಜಾಗಕ್ಕೂ, ಹೋಗಬೇಕಾದ ಜಾಗಕ್ಕೂ ಬಹಳ ದೂರವೆನಿಸಿದರೂ, ರಾಜಾಜಿನಗರದ ನಳಪಾಕ ಹೋಟೆಲಿನಲ್ಲಿ ಒಂದು ದಾವಣಗೆರೆ ಬೆಣ್ಣೆ ದೋಸೆ ತಿನ್ನಲೇಬೇಕೆನಿಸಿತು. ಹಠ ಸಾಧಿಸಿಯೇ ಬಿಟ್ಟೆ! (ಜೀವನದಲ್ಲಿ ಇಂತಹ ಹಠಗಳನ್ನು ಯಾವತ್ತೂ miss ಮಾಡಿಕೊಂದಿಲ್ಲ ನಾನು!) ಅಲ್ಲಿಗೆ ಹೋದ ಮೇಲೆ ಹಸಿವು ಹೆಚ್ಚಾಗಿ ಬೆಣ್ಣೆ ದೋಸೆ ಜೊತೆ ಮಸಾಲ ಪಡ್ಡುನೂ ಗುಳುಂ ಸ್ವಾಹ!!

ನಾನಿರುವ ಜಾಗಕ್ಕೂ, ಹೋಗಬೇಕಾದ ಜಾಗಕ್ಕೂ ಬಹಳ ದೂರವೆನಿಸಿದರೂ, ರಾಜಾಜಿನಗರದ ನಳಪಾಕ ಹೋಟೆಲಿನಲ್ಲಿ ಒಂದು ದಾವಣಗೆರೆ ಬೆಣ್ಣೆ ದೋಸೆ ತಿನ್ನಲೇಬೇಕೆನಿಸಿತು. ಹಠ ಸಾಧಿಸಿಯೇ ಬಿಟ್ಟೆ! (ಜೀವನದಲ್ಲಿ ಇಂತಹ ಹಠಗಳನ್ನು ಯಾವತ್ತೂ miss ಮಾಡಿಕೊಂದಿಲ್ಲ ನಾನು!) ಅಲ್ಲಿಗೆ ಹೋದ ಮೇಲೆ ಹಸಿವು ಹೆಚ್ಚಾಗಿ ಬೆಣ್ಣೆ ದೋಸೆ ಜೊತೆ ಮಸಾಲ ಪಡ್ಡುನೂ ಗುಳುಂ ಸ್ವಾಹ!!
--------------@ ನಿತ್ಯಾನಂದನ ಸುಟ್ಟ ಚಿತ್ರಪಟ @---------------

ಅವರು: "ನೀವು ನಿತ್ಯಾನಂದ ಸ್ವಾಮಿಗಳನ್ನು ನೋಡಲು ಬಂದವರೆ?"
ನಾನು: "ಹಾಗೇನು ಇಲ್ಲ.. ಸುಮ್ನೆ ಆಶ್ರಮ ನೋಡಿ ಹೋಗೋಣ ಅಂತ ಬಂದೆ.. ನೀವು ಸ್ವಾಮಿಯನ್ನು ನೋಡಲು ಬಂದವರೇ?"
ಅವರು "ಇಲ್ಲ ನಾನು ಆಶ್ರಮದಲ್ಲೆ ಕೆಲಸ ಮಾಡುವವನು.. ನೀವು ಹೊಸಬರು ಆಶ್ರಮದ ಒಳಗಡೆ ಹೋಗಲು ಬಿಡುವುದಿಲ್ಲ. ನಾನು ನಮ್ಮವರು ಎಂದು
ಹೇಳಿ ಒಳಗೆ ಕರೆದುಕೊಂಡು ಹೋಗ್ತೀನಿ ಬನ್ನಿ.."
---------@ ಆಶ್ರಮದಲ್ಲಿ ಹೆಜ್ಜೆ ಹೆಜ್ಜೆಗೂ checkpost@---------

-----------------@ ಆನಂದಲಿಂಗ ಕೊಳ@-----------------


ಆ ಆನಂದಲಿಂಗದಿಂದ ಮುಂದೆ ನಡೆದು ಹೋದೆ. ಅಲ್ಲಿ ಒಂದು ಪ್ರಾರ್ಥನಾ ಮಂದಿರ ಇತ್ತು. ಅಲ್ಲಿ ಕೆಲವರು ಭಕ್ತಾದಿಗಳು ಕುಳಿತಿದ್ದರು. ಅವರೆಲ್ಲರದ್ದೂ ಅದೇ ವೇಷ. ಅವರ ಹಾವ-ಭಾವ, ಮಾತನಾಡುವ ಶೈಲಿ ಇವೆಲ್ಲ ನೋಡಿದರೆ ಏನೋ ಹೆಚ್ಚು ಕಮ್ಮಿಯಾದಂತೆ ಕಾಣುತಿತ್ತು. ಹಿಂದಿ ಚಿತ್ರ Dostana ನೆನಪಾಯಿತು! ಅವರೆಲ್ಲರೂ ಭಕ್ತಿ"ಗೇ" ಭಕ್ತರಂತೆ ಕಾಣುತ್ತಿದ್ದರು!! ಪ್ರಾರ್ಥನಾ ಮಂದಿರದ ಎದುರು ಬಂದು ಕುಳಿತಾಗ ಬಿಸಿ ಬಿಸಿ ಕಾಫ಼ಿ ಬಂತು.. ರಾಜು ತೆಗೆದುಕೊಂಡರು, ನಾನು ಬೇಡವೆಂದೆ. (ಅದರಲ್ಲಿ ಏನಾದರೂ ಬೆರೆಸಿರಬಹುದೇ? ಎಂಬ ಅನುಮಾನ ಸುಳಿಯದಿರಲಿಲ್ಲ!)

ಅಲ್ಲಿಂದ ಹೊರಟು ಬಲ ತಿರುವಿನಲ್ಲಿ 'ಶ್ರೀ ಆನಂದೇಶ್ವರ ದೇವಾಲಯ'. ಈ ದೇವಾಲಯದ ಎದುರಿಗೇ ನಿತ್ಯಾನಂದ ಪಂಚಾಗ್ನಿ ವ್ರತ ಮಾಡಿದ್ದಿದ್ದು. ಈ ಸ್ಠಳದಲ್ಲಿ ದುಂಡಾಕಾರದ ಬೂದಿ ಸಹ ಇನ್ನೂ ಹಾಗೇ ಇತ್ತು. ದೇವಸ್ಥಾನದ ಒಳಗೆ ಇನ್ನೊಂದು ಆಶ್ಚರ್ಯ ಕಂಡೆ. ಅಲ್ಲಿ ಒಬ್ಬರು ನಿತ್ಯಾನಂದನ ಭಕ್ತೆಯಿದ್ದರು. ಅವರದ್ದು ಏನು ಓಯ್ಯಾರ ಅಂತಿರಾ!! ಆಹಾ!! full make-up ಮಾಡ್ಕೊಂಡು ಮಿಂಚಿಂಗೋ ಮಿಂಚಿಂಗ್!! ಬಿಳೀ ಸೀರೆಯಲ್ಲಿದ್ದ ಅವರು lipstick ಜೋರಾಗೆ ಬಳಿದುಕೊಂಡಿದ್ದರು. ಅವರು ಪೂಜೆಗಂತೂ ಬಂದವರಂತೆ ಕಾಣುತ್ತಿರಲಿಲ್ಲ!
ದೇವಸ್ಥಾನದಲ್ಲಿ ಪಾರ್ವತಿಯನ್ನು ತೊಡೆಯ ಮೇಲೆ ಕೂಡಿಸಿಕೊಂಡ ಈಶ್ವರನ 'ಆನಂದೇಶ್ವರ ರೂಪ'. ಅದರ ಎದುರು ಒಂದು ಲಿಂಗ. ಆಹ! ಶಂಭೋ ಶಂಕರ ಎಂದು ಕೈ ಮುಗಿಯೋಣ ಅಂದು ಕೊಂಡರೆ ಮತ್ತೆ ಆ ಲಿಂಗದ ಎದುರಿಗೆ ಒಂದೂವರೆ ಅಡಿ ಎತ್ತರದ ನಿತ್ಯಾನಂದನ ಅಮೃತಶಿಲೆಯ (Marble) ವಿಗ್ರಹ. ನನ್ನ ನಮನಗಳು ನಿತ್ಯಾನಂದನ ವಿಗ್ರಹವನ್ನು bypass ಮಾಡಿ ಹಿಂದೆ ಇರುವ ಲಿಂಗಕ್ಕೆ ಹೋಗಲಿ ಎಂದುಕೊಂಡೆ.
------------@ 600 ವರ್ಷದ ಹಿಂದಿನ ಆಲದ ಮರ @-------------

ನಂತರ ರಾಜು ದೇವಾಲಯದ ಹಿಂಭಾಗಕ್ಕೆ ಕೊಂಡೊಯ್ದರು. ಅಲ್ಲಿ ಒಂದು ಬೃಹತ್ ಆಲದ ಮರ. ಸುಮಾರು 600 ವರ್ಷ ಹಳೆಯದೆಂಬ ಪ್ರತೀತಿ ಇಲ್ಲಿದೆ. 4X4 ಚದುರಡಿ ಅಗಲವಾದ ಆ ಮರದ ಪೊಟರೆಯೊಳಗೆ ಶಿವಲಿಂಗವೊಂದು ದೊರೆತಿತ್ತೆಂದು ಹೇಳಲಾಗುತ್ತದೆ. ಈಗಲೂ ಆ ಪೊಟರೆಯೊಳಗಿನ ಗುಹೆ ಹಾಗೇ ಇದೆ. ಒಬ್ಬ ಮನುಷ್ಯ ಹೊಗಿ ಕೂತು ಬರಬಹುದಾದಷ್ಟು ದೊಡ್ಡ ಗುಹೆ ಇದೆ ಆ ಜೀವಂತ ಮರದ ಪೊಟರೆಯೊಳಗೆ! ಅದರ ಪಕ್ಕದಲ್ಲೆ ದಕ್ಷಿಣಾಮೂರ್ತಿ ವಿಗ್ರಹವಿದೆ.
------@ ಆಲದಮರದ ಪೊಟರೆಯೊಳಗೆ ಲಿಂಗ ದೊರೆತ ಗುಹೆ @---------

ಇಷ್ಟೆಲ್ಲ ನೋಡಿದ ಮೇಲೆ ನಿತ್ಯಾನಂದನನ್ನು ನೋಡದೆ ಹೋದರೆ ಹೇಗೆ ಎಂದು ಅನ್ನಿಸಿತು. ರಾಜು ಇಂದು ಸ್ವಾಮಿಗಳು ಸಿಗುವರೆ ಎಂದು ಯಾರನ್ನೋ ವಿಚಾರಿಸಿದಾಗ ಅದು ಸಾಧ್ಯವಿಲ್ಲ ಎಂದು ತಿಳಿಯಿತು. ರಾಜು ಮಠದ PRO - Public Relations Officer ಸದಾನಂದ ಜೊತೆ mobile ನಲ್ಲಿ ಮಾತಾಡಿದರೂ ಅದು ಸಾಧ್ಯವಾಗಲಿಲ್ಲ. ನಾವು ವಾಪಸ್ ಹೊರಡಬೇಕಾದರೆ, ನಿತ್ಯಾನಂದನ ಜೊತೆಗೆ ಜೈಲಿನಲ್ಲಿದ್ದ ಆತನ ಅಪ್ಪಟ ಶಿಷ್ಯ ಬೋಧಾನಂದನ ದರ್ಶನವಾಯಿತು.
---------@ ದಕ್ಷಿಣಾ ಮೂರ್ತಿ ವಿಗ್ರಹ @------------

ವಾಪಸ್ ಹೊರಡುವಾಗ ನನಗೆ ವೀರಪ್ಪನ್ ಪಾಳೆಯದಲ್ಲಿ ಸುತ್ತಾಡಿ ಬಂದ ನಕ್ಕೀರನ್ ಪತ್ರಿಕೆ ಸಂಪಾದಕ ರಾಜ್ ಗೋಪಾಲನಂತೆ ಭಾಸವಾಗುತಿತ್ತು! ಒಂದು ಅಪೂರ್ವ ಅನುಭವ!! ರಾಜು ಅವರು ಸಹ ರಾಮನಗರದ ಕಡೆ ಹೊರಟಿರುವರೆಂದು ತಿಳಿಯಿತು. ಮಾತನಾಡುತ್ತಾ ಗಾಡಿಯಲ್ಲಿ ಹೊರಟೆವು.
ನಾನು: "ಅಲ್ಲಿ ಏನು ಕೆಲಸ?"
ರಾಜು: "ಆಫ಼ೀಸಿನಲ್ಲಿ meeting ಇದೆ"
ರಾಮನಗರ ತಲುಪಿದ ನಂತರ ಸೀದಾ Police Station ಎದುರಿಗೆ ಗಾಡಿ ನಿಲ್ಲಿಸಲು ಹೇಳಿ ಇಳಿದುಕೊಂಡರು.
ನನು: "ಎಲ್ಲಿದೆ ನಿಮ್ಮ ಆಫ಼ೀಸು?"
ರಜು: "ಇದೇ ನಮ್ಮ station" ಎಂದು ನಕ್ಕರು.
ನನಗೆ ಮಾತೇ ಹೊರಡಲಿಲ್ಲ.. ಅವರು ಮುಂದುವರಿಸಿದರು.. " ನಾನು Police Constable ನಿತ್ಯಾನಂದನ ಆಶ್ರಮದಲ್ಲಿ secret Invigilation ಗೆ ಬಂದಿದ್ದೆ. ಅಲ್ಲಿ ನಡೆಯುವ ಕಾರ್ಯಗಳು, ಬಂದು ಹೋಗುವ ಜನಗಳು, ಎಲ್ಲದರ ಮೇಲು ಒಂದು ಕಣ್ಣಿಟ್ಟು ಪೋಲೀಸರಿಗೆ information ಕೊಡೋಕೆ ನಮ್ಮನ್ನ Civil dress ನಲ್ಲಿ ಅಲ್ಲಿಗೆ ಕಳುಹಿಸಿದ್ದರು. ಗಲಾಟೆ ನಡೆದಾಗಿನಿಂದಲೂ ನಿತ್ಯವೂ ಅಲ್ಲಿಗೆ ಇದೇ ರೀತಿ ಹೋಗಿ ಬರ್ತೀವಿ. ತುಂಬಾ thanks.. ಬೆಟ್ಟಕ್ಕೆ ಹೋಗಿ ಬನ್ನಿ. ನಿಮಗೆ ಏನಾದರೂ ತೊಂದರೆ ಆದರೆ ನನಗೆ ಫೋನ್ ಮಾಡಿ ನನ್ನ ನಂಬರ್...." ಎಂದು mobile number ಕೊಟ್ಟು ಅವರು ಹೊರಟು ಹೋದರು. ಅವರು ಹೇಳಿದ್ದು ಕೇಳಿ ಆಶ್ಚರ್ಯವಾಗಿ ನಾನು ಒಂದು ನಿಮಿಷ ಅಲುಗಾಡದೇ ನಿಂತೆ!!
-------@ ಶ್ರೀ ರಾಮ ಬೆಟ್ಟದ ಮೇಲಿನ ರಾಮ ಮಂದಿರ @---------

ಬೆಟ್ಟದ ಮೇಲಿಂದ ರಾಮನಗರದ ಸುತ್ತಮುತ್ತಲಿನ ಎಲ್ಲ ಬೆಟ್ಟ-ಗುಡ್ಡಗಳು ಕಾಣುತ್ತವೆ. ಈ ಬೆಟ್ಟ ಗುಡ್ಡಗಳ ನಡುವೇನೆ 1975 ಹಿಂದಿ ಚಿತ್ರ 'Sholay' ಚಿತ್ರೀಕರಣವಾಗಿದ್ದು!15th August 2010 ಗೆ ಅದು ಬಿಡುಗಡೆಯಾಗಿ 35 ವರ್ಷ ತುಂಬಿತು!
==================================================