Wednesday, January 27, 2010

ಮನಸಲ್ಲೆ ಮಾತಾಡುವೆ



*** ಮನಸಲ್ಲೆ ಮಾತಾಡುವೆ ***









ಮನಸಲ್ಲೆ ಮಾತಾಡುವೆ ನಿನ್ನೊಂದಿಗೆ..
ನಾ ಒಂಟಿಯಾಗಿ ಕುಳಿತು..
ಕನಸಲ್ಲೆ ಓಡಾಡುವೆ ನಿನ್ನೊಂದಿಗೆ..
ನಾ ಕೈಯಲ್ಲಿ ಕೈ ಹಿಡಿದು..

ಇಲ್ಲಿನ ನೀರನ್ನು ಆವಿಯಾಗಿ ಸೆಳೆದು
ಮೆಲ್ಲಗೆ ಮೋಡವಾಗಿ ಕದ್ದೊಯ್ದು
ಇನ್ನೆಲ್ಲೊ ಕರಗಿ ಮಳೆಯ ಸುರಿಸುತಿರುವೆ ನೀನು...
ಬರುಡಾದ ಭೂಮಿಯಲಿ ಕಂಬನಿಯ ನೀರ ಹರಿಸಿ
ಗಿಡವ ಬೆಳೆಸಿದೆ ನಾನು..

ಗಿಡವಿಂದು ಬೆಳೆದು ಆಗಿದೆ ಹೆಮ್ಮರ
ಅದರ ಸಾವಿರಾರು ಎಲೆಗಳ ಮೇಲೆ
ನಿನ್ನ ಹೆಸರ ಬರೆದು ಮಾಡಿದೆ
ನಾ ನಿನ್ನ ನೆನಪುಗಳ ಅಮರ..

ನಮ್ಮಿಬ್ಬರ ದೂರ ಮಾಡಿ
ಕಾಲವು ಕಟ್ಟಿಹುದು ಭದ್ರ ಕೋಟೆ
ಆಕಾಶ ಮುಟ್ಟುವಂತಿದ್ದ ಆಸೆಗಳು
ಇಂದು ಊರಾಚೆಯ ಸಮಾಧಿಯಷ್ಟೆ
ಆಗಾಗ ಸಮಾಧಿಯೂ ಪಿಸುಗುಡುವುದು
ಹೃದಯದಿ ಹುದುಗಿದ್ದ ಕೆಂಡ
ಆಗ ಬೆಂಕಿಯಾಗಿ ನನ್ನ ಸುಡುವುದು..
ಹೀಗೆ ಹೃದಯ ಸುಟ್ಟಾಗಲೆಲ್ಲಾ...
ನಾ ಮತ್ತೆ...

ಮನಸಲ್ಲೆ ಮಾತಾಡುವೆ ನಿನ್ನೊಂದಿಗೆ..
ನಾ ಒಂಟಿಯಾಗಿ ಕುಳಿತು..
ಕನಸಲ್ಲೆ ಓಡಾಡುವೆ ನಿನ್ನೊಂದಿಗೆ..
ನಾ ಕೈಯಲ್ಲಿ ಕೈ ಹಿಡಿದು..





Monday, January 25, 2010




ನನ್ನ ಬಗ್ಗೆ....
ಈ ಪ್ರದೀಪ...
ಆಗಲು ಬಯಸಿದ್ದು...
ಪ್ರೀತಿಯ ಬೆಳಕು ಚೆಲ್ಲುವ ಪ್ರಖರ ದೀಪ.
ಈ ಪ್ರದೀಪ...
ಆಗಲು ಬಯಸಿದ್ದು...
ಪ್ರೀತಿಯ ಬೆಳಕು ಚೆಲ್ಲುವ ಪ್ರಖರ ದೀಪ.
ಆದರೆ ವಿಧಿಯು ನನ್ನ ಮಾಡಿದ್ದು...
ಪ್ರೀತಿಯ ತೀರದಿಂದ ದೂರಾಗಿ
ಹತಾಶೆಯ ಸಾಗರದಿ ಮುಳುಗಿದ
ಅಜ್ಞಾತ ಒಂಟಿ ದ್ವೀಪ!


ದೇವರೇ.... ನೀನು ಕಲ್ಲು



ಓ ದೇವರೇ..
ಎಷ್ಟು ಚೆನ್ನಾಗಿರುತಿತ್ತು...
ನಿಂತುಬಿಡುವ ಹಾಗಿದ್ದರೆ
ನಾವು ಕಲ್ಲಾಗಿ ನಿನ್ನಂತೆ!
ಬಿಟ್ಟು ಈ ಜೀವ ದೇಹದ ಚಿಂತೆ.

ಯಾರ ಪ್ರಶ್ನೆಗೂ ಉತ್ತರಿಸುವಷ್ಟಿಲ್ಲ
ಜರೆದರೂ ಎಲ್ಲರೂ ಮೌನವೇ ಎಲ್ಲಾ
ಮುನ್ನಡೆಯುವುದು ಹೇಗೆ ಎಂಬ
ಯೋಚನೆಯೇ ಇರದು..
ಹಿಂದಿನಿಂದ ಯಾರೂ ತಳ್ಳಲೂ ಆಗದು
ಸುಮ್ಮನೆ ನಗುತಾ ಇರಬಹುದು
ನಿಂತಲ್ಲೇ ನಿಂತು..
ಸಹಿಸಲು ಸಾಧ್ಯ ಆಗ ಒಂದೊಂದಾಗಿ
ನೀ ಕೊಡುವ ಕಷ್ಟಗಳ ಕಂತು.

***********************************************************

ತಿರುಪತಿ ತಿಮ್ಮಪ್ಪನ ಅನುಗ್ರಹ ನಮ್ಮೆಲರ ಮೇಲಿರಲಿ ಅಂತ ಬೇಡುವೆ...